ರೂಬಿ ಸಿನಿ ಕ್ರಾಪ್ಟ್ ಸಂಸ್ಥೆಯಲ್ಲಿ ಆರ್.ಜಿ.ಸಿದ್ದರಾಮಯ್ಯ ನಿರ್ಮಿಸುತ್ತಿರುವ ಅಭಿನೇತ್ರಿ ಪೂಜಾಗಾಂಧಿ ದೇವದಾಸಿಯಾಗಿ ಅಭಿನಯಿಸಿರುವ ಹಾಗೂ ಚಿತ್ರದುರ್ಗದಲ್ಲಿ ನಡೆದ ನೈಜ ಕಥೆ ಆಧಾರಿತ ಚಿತ್ರ ತಿಪ್ಪಜ್ಜಿ ಸರ್ಕಲ್ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆದಿತ್ಯ ಚಿಕ್ಕಣ್ಣ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಡಾ|| ಬಿ.ಎಲ್.ವೇಣು ಕಥೆ ಮತ್ತು ಸಂಭಾಷಣೆ, ಭರಣಿ ಶ್ರೀ ಸಂಗೀತ, ದೀಪು ಎಸ್.ಕುಮಾರ್ ಸಂಕಲನ, ಗೂಟೂರಿ, ಭರಣಿ ಶ್ರೀ.ಗೌಸ್ಫಿರ್, ಸಾಹಿತ್ಯ, ತ್ರಿಭುವನ್, ಮದನ್ ಹರಿಣಿ ನೃತ್ಯ ನಿರ್ದೇಶನವಿದೆ. ಪೂಜಾ ಗಾಂಧಿ, ಡಾ|| ಸುರೇಶ್ ಶರ್ಮ, ದೃವಶರ್ಮ, ನೇಹಾ ಪಾಟೀಲ್, ಭವ್ಯ, ಸತ್ಯಜಿತ್, ಶ್ರೀನಿವಾಸಮೂರ್ತಿ, ಮಾನಸಿ, ಸುರೇಶ್ರೈ, ಜಯರಾಂ, ಬೇಬಿ ಅನುಷ್, ಜ್ಯೋತಿ ಗುರುಪ್ರಸಾದ್ ತಾರಾಬಳಗದಲ್ಲಿದ್ದಾರೆ.